ದೇವಾಲಯದ ಬಗ್ಗೆ:
ಶ್ರೀ ರೇವಣ ಸಿದ್ದೇಶ್ವರ ದೇವಸ್ಥಾನವು ಕರ್ನಾಟಕದ ರಾಮನಗರ ಪಟ್ಟಣದ ಸಮೀಪವಿರುವ ಬೆಟ್ಟದ ತುದಿಯಲ್ಲಿದೆ. ಶ್ರೀ ರೇವಣ ಸಿದ್ದೇಶ್ವರ ಸ್ವಾಮಿಯನ್ನು ಹಿಂದೂ ಧರ್ಮದಲ್ಲಿ ಶೈವ ಪಂಥದ ಶ್ರೇಷ್ಠ ಸಂತರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಶ್ರೀ ರೇವಣ ಸಿದ್ದೇಶ್ವರರು "ವೀರಶೈವ ಸಿದ್ದಾಂತ" (ಶೈವ ಧರ್ಮ) ಸ್ಥಾಪಕರಾದ ಜಗದ್ಗುರು ಶ್ರೀ ರೇಣುಕಾಚಾರ್ಯರ ಪುನರ್ ಅವತಾರವೆಂದು ನಂಬಲಾಗಿದೆ, "ಸರ್ವೇ ಜನಃ ಸುಖಿನೋ ಭವಂತು" ಎಂಬ ಘೋಷಣೆಯೊಂದಿಗೆ ಪವಿತ್ರವಾದ ಗುಹೆ ಬೆಟ್ಟದಲ್ಲಿ ತಪಸ್ಸು ಮಾಡಿದರು ಎಂದು ಹೇಳಲಾಗುತ್ತದೆ. ಈ ದೇವಾಲಯವು ಐತಿಹಾಸಿಕವಾಗಿದ್ದು, ದೇಶದಾದ್ಯಂತದ ಭಕ್ತರನ್ನು ಹೊಂದಿರುತ್ತದೆ ಮತ್ತು ಶಿವನ ಹೆಸರಿನಲ್ಲಿ ದೇಶಾದ್ಯಂತ ಸಂಚರಿಸಿ ಜನರಿಗೆ ಸೇವೆ ಸಲ್ಲಿಸಿದ ಶ್ರೀ ರೇವಣ ಸಿದ್ದೇಶ್ವರನಿಗೆ ಸಮರ್ಪಿತವಾಗಿದೆ.
ಲಭ್ಯವಿರುವ ಸೌಲಭ್ಯಗಳು:
ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. ಈ ಅತಿಥಿ ಗೃಹವು 14 ಎಕ್ಸ್ಕ್ಯೂಟಿವ್ ಕೊಠಡಿಗಳನ್ನು ಹೊಂದಿದೆ. ಇದರಲ್ಲಿ 7 ಕೊಠಡಿಗಳು ಡಬಲ್ ಕಾಟ್ಗಳ ವ್ಯವಸ್ಥೆ ಹೊಂದಿದ್ದು, ಇತರೆ 7 ಕೊಠಡಿಗಳಲ್ಲಿ ಸಿಂಗಲ್ ಕಾಟ್ ಸೌಲಭ್ಯವಿದೆ. ಎಲ್ಲಾ ಕೊಠಡಿಗಳಲ್ಲಿ ಶೌಚಾಲಯ ಮತ್ತು ಸ್ನಾನದ ಕೊಠಡಿ, ಗೀಸರ್ ಸೌಲಭ್ಯವಿದ್ದು, 24 ಗಂಟೆಗಳ ಕಾಲ ಕುಡಿಯುವ ನೀರಿನ ಸೌಲಭ್ಯ ಮತ್ತು ವಿದ್ಯುತ್ (ಯುಪಿಎಸ್ ಸಹಿತ) ಪೂರೈಕೆಯನ್ನು ಹೊಂದಿದೆ. ಪ್ರತಿ ಕೋಣೆಗೆ ಹೆಚ್ಚುವರಿ ಚಾಪೆ, ದಿಂಬು ಮತ್ತು ಬೆಡ್ಶೀಟ್ಗಳನ್ನು ಒದಗಿಸಲಾಗುತ್ತದೆ ಮತ್ತು ಪ್ರತಿಯೊಂದು ಕೊಠಡಿಯಲ್ಲಿ 4 ಜನರಿಗೆ ತಂಗಲು ಅವಕಾಶ ಕಲ್ಪಿಸಲಾಗಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ದೇವಸ್ಥಾನದ ಸಮೀಪದಲ್ಲಿ ಸುಮಾರು 3 ರಿಂದ 4 ಖಾಸಗಿ ರೆಸಾರ್ಟ್ಗಳಿವೆ.
Google Map Link to Address: https://goo.gl/maps/ENsgdGXoSvD3sW2DA
ವಿಳಾಸ: ಅಡ್ರೆಸ್: ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ,ಅವ್ವೆರಹಳ್ಳಿ,ಕೈಲಾಂಚ ಹೋಬಳಿ,ರಾಮನಗರ(ತಾ,ಡಿ)
ದೂರವಾಣಿ: +91 90194 24450
ಇಮೇಲ್: [email protected]