www.karnatakatemplesaccommodation.com ಇದು ಕರ್ನಾಟಕ ಸರ್ಕಾರದ ಅಧಿಕೃತ ಹಾಗೂ ದೇವಾಲಯಗಳ ಬಳಿ ವಸತಿ ಕಾಯ್ದಿರಿಸಲು ಏಕೈಕ ವೆಬ್‌ಸೈಟ್ ಆಗಿದೆ. ಪಾವತಿಗಳನ್ನು ವೆಬ್‌ಸೈಟ್‌ನ ಪಾವತಿ ಗೇಟ್‌ವೇ ಮೂಲಕ ಮಾತ್ರ ಮಾಡಬೇಕೆಂದು ಮತ್ತು ಅಪರಿಚಿತ ಮೊಬೈಲ್ ಫೋನ್ ಸಂಖ್ಯೆಗಳಿಗೆ ನೇರವಾಗಿ ಪಾವತಿಯನ್ನು ವರ್ಗಾಯಿಸಬಾರದೆಂದು ಜಾಲತಾಣದ ಬಳಕೆದಾರರಲ್ಲಿ ವಿನಂತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ. www.karnatakatemplesaccommodation.com is the only official Karnataka Government website for booking accommodations near temples. Payments must be made only via the website's payment gateway. Avoid paying anyone directly, especially by transferring payment directly to unknown mobile phone numbers. Please Verify authenticity if in doubt—contact us for assistance.
www.karnatakatemplesaccommodation.com ಇದು ಕರ್ನಾಟಕ ಸರ್ಕಾರದ ಅಧಿಕೃತ ಹಾಗೂ ದೇವಾಲಯಗಳ ಬಳಿ ವಸತಿ ಕಾಯ್ದಿರಿಸಲು ಏಕೈಕ ವೆಬ್‌ಸೈಟ್ ಆಗಿದೆ. ಪಾವತಿಗಳನ್ನು ವೆಬ್‌ಸೈಟ್‌ನ ಪಾವತಿ ಗೇಟ್‌ವೇ ಮೂಲಕ ಮಾತ್ರ ಮಾಡಬೇಕೆಂದು ಮತ್ತು ಅಪರಿಚಿತ ಮೊಬೈಲ್ ಫೋನ್ ಸಂಖ್ಯೆಗಳಿಗೆ ನೇರವಾಗಿ ಪಾವತಿಯನ್ನು ವರ್ಗಾಯಿಸಬಾರದೆಂದು ಜಾಲತಾಣದ ಬಳಕೆದಾರರಲ್ಲಿ ವಿನಂತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ. www.karnatakatemplesaccommodation.com is the only official Karnataka Government website for booking accommodations near temples. Payments must be made only via the website's payment gateway. Avoid paying anyone directly, especially by transferring payment directly to unknown mobile phone numbers. Please Verify authenticity if in doubt—contact us for assistance.
www.karnatakatemplesaccommodation.com ಇದು ಕರ್ನಾಟಕ ಸರ್ಕಾರದ ಅಧಿಕೃತ ಹಾಗೂ ದೇವಾಲಯಗಳ ಬಳಿ ವಸತಿ ಕಾಯ್ದಿರಿಸಲು ಏಕೈಕ ವೆಬ್‌ಸೈಟ್ ಆಗಿದೆ. ಪಾವತಿಗಳನ್ನು ವೆಬ್‌ಸೈಟ್‌ನ ಪಾವತಿ ಗೇಟ್‌ವೇ ಮೂಲಕ ಮಾತ್ರ ಮಾಡಬೇಕೆಂದು ಮತ್ತು ಅಪರಿಚಿತ ಮೊಬೈಲ್ ಫೋನ್ ಸಂಖ್ಯೆಗಳಿಗೆ ನೇರವಾಗಿ ಪಾವತಿಯನ್ನು ವರ್ಗಾಯಿಸಬಾರದೆಂದು ಜಾಲತಾಣದ ಬಳಕೆದಾರರಲ್ಲಿ ವಿನಂತಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ. www.karnatakatemplesaccommodation.com is the only official Karnataka Government website for booking accommodations near temples. Payments must be made only via the website's payment gateway. Avoid paying anyone directly, especially by transferring payment directly to unknown mobile phone numbers. Please Verify authenticity if in doubt—contact us for assistance.

ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದ ವಸತಿ ಗೃಹ, ಬೆಂಗಳೂರು ಗ್ರಾಮಾಂತರ

  • 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ, ಆದರೆ 12 ವರ್ಷ ಅಥವಾ ಹೆಚ್ಚಿನ ವಯಸ್ಸಿನವರಿಗೆ ವಯಸ್ಕರಂತೆ ಶುಲ್ಕ ವಿಧಿಸಲಾಗುತ್ತದೆ.
  • ಪ್ರತಿ ಕೊಠಡಿಯಲ್ಲಿ ಗರಿಷ್ಠ ಇಬ್ಬರು ವಯಸ್ಕರು ಮತ್ತು ಒಬ್ಬ ಮಗುವಿಗೆ ಆಸರೆಯಿರುತ್ತದೆ.
  • ಬಳಕೆದಾರರು ಗರಿಷ್ಠ 2 ಕೊಠಡಿಗಳನ್ನು ಮಾತ್ರ ಬುಕ್ ಮಾಡಬಹುದು ಮತ್ತು ಗರಿಷ್ಠ 3 ದಿನಗಳವರೆಗೆ ಕೊಠಡಿಗಳನ್ನು ಬುಕ್ ಮಾಡಬಹುದು.
  • ಒಮ್ಮೆ ಬುಕಿಂಗ್ ಮಾಡಿದ ನಂತರ ಮರುಪಾವತಿ ಅಥವಾ ರದ್ದತಿ ಅವಕಾಶ ಇರುವುದಿಲ್ಲ.
  • ಮುಂಗಡ ಠೇವಣಿಯನ್ನು ವ್ಯವಸ್ಥಾಪಕರಿಗೆ ನಗದು ರೂಪದಲ್ಲಿ ನೀಡಬೇಕು. ದಯವಿಟ್ಟು ಮುಂಗಡ ಠೇವಣಿಯ ನಗದು ನಿಮ್ಮೊಂದಿಗೆ ಇಟ್ಟುಕೊಳ್ಳಿ.
  • ಕೊಠಡಿಯೊಳಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದು ನಿಷಿದ್ಧ.
  • ಯಾವುದೇ ಸರ್ಕಾರಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೊಠಡಿ ಬುಕ್‌ಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಹಣವನ್ನು ಮರುಪಾವತಿ ಮಾಡಲಾಗುತ್ತದೆ.
  • ಪ್ರವೇಶದ ಸಮಯದಲ್ಲಿ, ಬುಕ್ಕಿಂಗ್ ಮಾಡುವಾಗ ಬಳಸಿದ ಮೂಲ ಗುರುತಿನ ದಾಖಲೆ (Original ID Proof) ಅನ್ನು ತೋರಿಸುವುದು ಕಡ್ಡಾಯ. ಪ್ರಸ್ತುತ ವಯಸ್ಸಿನ childrens ಗೆ ವಯಸ್ಸಿನ ದಾಖಲೆಯನ್ನು ತೋರಿಸುವುದರ ಮೂಲಕ ಟಿಕೆಟ್ ಇಲ್ಲದೆ ದೇವಾಲಯ ಪ್ರವೇಶಕ್ಕೆ ಅವಕಾಶ ಸಿಗುತ್ತದೆ.
  • ಭಕ್ತರು ಪರಂಪರಾ ಪರಿಪಾಲನೆಯ ಪೋಷಕ ವಸ್ತ್ರಧಾರಣೆಯನ್ನು ಮಾತ್ರ ಪಾಲಿಸಬೇಕು. ಪುರುಷರು: ಧೋತಿ, ಶರ್ಟ್/ಕೂರ್ತಾ, ಪೈಜಾಮಾ/ಪ್ಯಾಂಟ್. ಮಹಿಳೆಯರು: ಸೀರೆ/ಅರ್ಧ ಸೀರೆ/ಚುಡಿದಾರ್ ಡುಪಟ್ಟಾ ಸಹಿತ.
  • ಗುಂಪು ಟಿಕೆಟ್‌ನ ಎಲ್ಲಾ ಭಕ್ತರು ಒಟ್ಟಾಗಿ ಹಾಜರಿರಬೇಕು.
  • ಎಲ್ಲಾ ಭಕ್ತರು ತಮ್ಮ ಬುಕಿಂಗ್ ಮಾಡಿದ ಸಮಯ ಸ್ಲಾಟ್‌ಗೆ ಅನುಗುಣವಾಗಿ ಮಾತ್ರ ಹಾಜರಾಗಬೇಕು.
  • ಎಲ್ಲಾ ಬುಕಿಂಗ್‌ಗಳು ಅಂತಿಮವಾಗಿದ್ದು, ಬದಲಾವಣೆ / ಮುಂದೂಡುವಿಕೆ / ಹಿಂದೆ ತರುವಿಕೆ / ರದ್ದತಿ ಅಥವಾ ಮರುಪಾವತಿ ಅವಕಾಶ ಇರುವುದಿಲ್ಲ (ಪಾವತಿಸಿದ ಬಳಿಕ).
  • ಏನೇ ರೀತಿಯ ಕಾಲುಜೊರೆ (ಪಾದರಕ್ಷೆ) ಧರಿಸಿ ಕ್ಯೂ ಲೈನ್ ಅಥವಾ ದೇವಾಲಯದ ಒಳಗೆ ಪ್ರವೇಶಿಸುವಂತಿಲ್ಲ.
  • ಕೊವಿಡ್-19 ಹಿನ್ನೆಲೆಯಲ್ಲಿ, ಎಲ್ಲಾ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ತಾಪಮಾನ ತಪಾಸಣೆಗೆ ಸಹಕಾರ ನೀಡಬೇಕು ಮತ್ತು ವೈಯಕ್ತಿಕ ಸ್ಯಾನಿಟೈಸರ್ ಬರುವಂತೆ ಹತ್ತಿರ ಇಟ್ಟುಕೊಳ್ಳಬೇಕು.
  • ಭಕ್ತರು ಮೂರ್ತಿಗಳು, ಪವಿತ್ರ ಗ್ರಂಥಗಳು ಹಾಗೂ ಪ್ರತಿಮೆಗಳನ್ನು ಸ್ಪರ್ಶಿಸುವಂತಿಲ್ಲ ಮತ್ತು ಕ್ಯೂಗಳಲ್ಲಿ ಅಂತರವನ್ನು ಕಾಪಾಡಬೇಕಾಗಿದೆ (ಅದರಿಗಾಗಿ ಗುರುತುಗಳನ್ನು ನೀಡಲಾಗುತ್ತದೆ).
  • ಪವಿತ್ರ ನೀರು ಅಥವಾ ಇತರೆ ಶಾರೀರಿಕ ಅರ್ಪಣೆಗಳನ್ನು ಮಾಡುವ ಅವಕಾಶ ಇರುವುದಿಲ್ಲ.
  • ಭಕ್ತರು ದೇವಾಲಯದ ಒಳಗೆ ಬಜೆ (ಗಂಟೆ) ಗಳನ್ನು ಮಿಡಿಯಲು ಅನುಮತಿ ಇರುವುದಿಲ್ಲ ಮತ್ತು ಸಮೂಹ ಭೋಜನಗಳು ನಡೆಯುವುದಿಲ್ಲ.
  • ಚೆಕ್ ಇನ್ ಸಮಯದಲ್ಲಿ ನಿಮ್ಮ ಬುಕಿಂಗ್ ಮುದ್ರಿತ ಪ್ರತಿಯನ್ನು (printout) ನಿಮ್ಮೊಂದಿಗೆ ಇಟ್ಟುಕೊಳ್ಳಿ.
  • ಬೆಳಿಗ್ಗೆ 09:00 ರಿಂದ ಚೆಕ್-ಇನ್, ಮರುದಿನ 09:00 ರವರೆಗೆ ಚೆಕ್ಔಟ್ ಸಮಯ.

ದೇವಾಲಯದ ಬಗ್ಗೆ:
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಪುರಾತನ ಹಿಂದೂ ದೇವಾಲಯವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಜನಪ್ರಿಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಭಾರತದಲ್ಲಿ ಸರ್ಪ ದೋಷ ಪೂಜೆಗೆ ಪ್ರಮುಖ ಕೇಂದ್ರವಾಗಿದೆ. ಈ ದೇವಾಲಯಕ್ಕೆ 600 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಬಳ್ಳಾರಿಯ ಕೆಲವು ಭಾಗಗಳನ್ನು ಆಳಿದ ಸಂಡೂರು ರಾಜವಂಶದ ಘೋರ್ಪಡೆ ದೊರೆಗಳು ಈ ದೇವಾಲಯವನ್ನು ನಿರ್ಮಿಸಿದರು. ರಾಜನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡನು ಮತ್ತು ಅವನು ಇರುವ ಸ್ಥಳವನ್ನು ಬಹಿರಂಗಪಡಿಸಿದನು ಎಂದು ನಂಬಲಾಗಿದೆ. ರಾಜನು ಸ್ಥಳೀಯರ ಸಹಾಯದಿಂದ ನರಸಿಂಹ ಮತ್ತು ಸುಬ್ರಹ್ಮಣ್ಯ ದೇವರ ಸ್ವಯಂ-ವ್ಯಕ್ತವಾದ ಏಕ ವಿಗ್ರಹವನ್ನು ಕಂಡು  ಅದರ ಸುತ್ತಲೂ ದೇವಾಲಯವನ್ನು ನಿರ್ಮಿಸದನೆಂದು ಐತಿಹ್ಯವಿದೆ.

ಘಾಟಿ (ಅಂದರೆ "ಮಡಕೆ") ಎಂಬ ಪದವು ಸಂಸ್ಕೃತದ ಘಟ ಎಂಬ ಪದದಿಂದ ಬಂದಿದೆ. ಘಟ ಎಂದರೆ ಮಡಿಕೆ ಎಂಬರ್ಥ. ಹಾವಿನ ಹೆಡೆ ಮಡಿಕೆಯನ್ನು ಹೋಲುತ್ತದೆ. ಸುಬ್ರಹ್ಮಣ್ಯನ ರೂಪವು ಏಳು ಹೆಡೆಯ ಹಾವಿನ ರೂಪವಾಗಿದೆ ಮತ್ತು ಇದು ಸುಬ್ರಹ್ಮಣ್ಯ ಘಟಿಕಾಸುರ ಎಂಬ ರಾಕ್ಷಸನನ್ನು ಕೊಂದ ಸ್ಥಳ ಎಂದು ನಂಬಲಾಗಿದೆ. ಸರ್ಪದೋಷವಿರುವ ಜನರು ಇಲ್ಲಿಗೆ ಪೂಜೆ ಸಲ್ಲಿಸಿದ ನಂತರ ಭಗವಂತನಿಂದ ಕೃಪೆ ಹೊಂದುತ್ತಾರೆ. ಸಂತಾನವಿಲ್ಲದ ದಂಪತಿಗಳು ವ್ರತಗಳನ್ನು ಮಾಡುವ ಮೂಲಕ ಭಗವಂತನ ಕೃಪೆಯಿಂದ  ಸಂತಾನ ಭಾಗ್ಯವನ್ನು ಹೊಂದುವರು ಎಂಬುದು ಭಕ್ತರ ನಂಬಿಕೆಯಾಗಿದೆ. ಹಾವಿನ/ನಾಗರ ಕಲ್ಲಿನ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಸಂಬಂಧಿತ ಆಚರಣೆಯೆಂದರೆ, ದೇವಾಲಯದ ಬಳಿ ಅಂತಹ ಸಾವಿರಾರು ನಾಗರ ಕಲ್ಲಿನ ವಿಗ್ರಹಗಳನ್ನು ನೋಡಬಹುದು.

ಲಭ್ಯವಿರುವ ಸೌಲಭ್ಯಗಳು:ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಯಾತ್ರಿ ನಿವಾಸವನ್ನು 2015 ರಲ್ಲಿ ನಿರ್ಮಿಸಲಾಯಿತು. ಯಾತ್ರಿ ನಿವಾಸವು ಮುಖ್ಯ ದೇವಾಲಯದಿಂದ 500 ಮೀಟರ್ ದೂರದಲ್ಲಿದೆ. ಯಾತ್ರಿ ನಿವಾಸ 35 ಕೊಠಡಿಗಳನ್ನು ಹೊಂದಿದ್ದು, 24 ಗಂಟೆಗಳ ಬಿಸಿ ನೀರಿನ ಸೌಲಭ್ಯದೊಂದಿಗೆ ಶೌಚಾಲಯ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಇತ್ಯಾದಿಗಳನ್ನು ಹೊಂದಿದೆ. ಈ ಕೊಠಡಿಗಳಲ್ಲಿ ಮಾಂಸ ಸೇವನೆ, ಮದ್ಯ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.

ಈ ದೇವಾಲಯವು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 50 ಕಿಲೋಮೀಟರ್ ದೂರದಲ್ಲಿದೆ ಮತ್ತು ಹಸಿರಿನಿಂದ ಆವೃತವಾಗಿದೆ. ನಂದಿ ಬೆಟ್ಟಗಳು, ಭೋಗನಂದೀಶ್ವರ ದೇವಸ್ಥಾನ, ವಿದುರಾಶ್ವತ ದೇವಸ್ಥಾನ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಶ್ರೀನಿವಾಸ ಸಾಗರ ದೇವಸ್ಥಾನ (ಅಣೆಕಟ್ಟು) ಮತ್ತು ಹಿಂದೂಪುರ ಜಿಲ್ಲೆಯ ಲೇಪಾಕ್ಷಿಯಂತಹ ಭೇಟಿ ನೀಡಲು ಹತ್ತಿರದ ಅನೇಕ ಸ್ಥಳಗಳಿವೆ.

Google Map Link to Address: https://maps.app.goo.gl/b5o6Mk8W3QfrKDus5

ವಿಳಾಸ: ವಿಳಾಸ: CG5H + C86 ,ಘಾಟಿ,ಬ್ರಾಮ್ಹಣ ಬೀದಿ,ಘಾಟಿ ಸುಬ್ರಮಣ್ಯ,ದೊಡ್ಡಬಳ್ಳಾಪುರ (ಡಿ)

ದೂರವಾಣಿ: +91 94486 14186, +91 99809 07997

ಇಮೇಲ್: [email protected]